
ಯಲಹಂಕ : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರವಾಗಿ ಪ್ರಚಾರ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಿದ್ದು ಇದೇ ವೇಳೆ ಸ್ಥಳೀಯ ಶಾಸಕರಾದ ಎಸ್.ಆರ್ ವಿಶ್ವನಾಥ್ ವಿರುದ್ಧ ವಾಗ್ಧಾಳಿ ನಡೆಸಿದರು, ಯಲಹಂಕದ ಭ್ರಷ್ಟ ಬಿಜೆಪಿ ಶಾಸಕನನ್ನ ತೊಲಗಿಸಲು ಇಲ್ಲಿನ ಜನ ಪಣ ತೊಟ್ಟಿದ್ದಾರೆಂದು ಹೇಳಿದರು.
ಯಲಹಂಕದ ಅಟ್ಟೂರಿನಲ್ಲಿ ಅಯೋಜನೆ ಮಾಡಲಾಗಿದ್ದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು, ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು ಯಲಹಂಕದಲ್ಲಿ ವಿಶ್ವನಾಥ್ ರೆಡ್ಡಿ ಎಂಬ ಭೂತ ಇದೆಯೆಂದ್ದು ನೀವು ತಿಳಿದುಕೊಳ್ಳಬೇಡಿ, ಇಲ್ಲಿನ ಭ್ರಷ್ಟ ಬಿಜೆಪಿ ಶಾಸಕನನ್ನ ತೊಲಗಿಸಲು ಇಲ್ಲಿನ ಜನ ಪಣ ತೊಟ್ಟಿದ್ದಾರೆ. ಇಲ್ಲಿನ ಶಾಸಕರು ಅಧಿಕಾರಿಗಳು ಮತ್ತು ಪೊಲೀಸರಿಂದ ಕಿರುಕುಳ ಕೊಟ್ಟು ಬಿಜೆಪಿ ಬಾವುಟ ಕಟ್ಟುವಂತೆ ಹೇಳುತ್ತಿದ್ದಾರೆ, 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನ ಈ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಕೊಡುತ್ತೆ
ಅಧಿಕಾರಗಳೇ ನಿಮಗೆ ತಾಕಖ್ ಇದ್ದಾರೆ ರಾಜಿನಾಮೆ ಕೊಟ್ಟು ಬಿಜೆಪಿ ಬಾವುಟ ಹಿಡಿಯಿರಿ ಎಂದರು.
ನನಗೆ ಗೊತ್ತಿದೆ ಇದೇ ಅಧಿಕಾರಿಗಳಿಂದ ಕಾನೂನುಬದ್ಧ ಮತ್ತು ನ್ಯಾಯಬದ್ಧವಾಗಿ ಆಡಳಿತ ಮಾಡುವುದು,
ಯಲಹಂಕವೇನು ಬಿಜೆಪಿಯ ಭಧ್ರಕೋಟೆಯ ಕ್ಷೇತ್ರವಲ್ಲ, ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ, ಅಮಿತ್ ಶಾರವರೇ ಹೇಳಿದ್ದಾರೆ ಡಿಕೆಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆಂದ್ದು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಡಿಕೆಶಿವಕುಮಾರ್ ಗೆ ನೀವು ಅಧಿಕಾರ ಕೊಡಬೇಕು, ಬಿಜೆಪಿ ಕೊಡುವ ಅಧಿಕಾರ ಬೇಡ ಎಂದರು.
Popular Tags:

Nanje Gowda SS
AdminAt 29 years old, my favorite compliment is being told that I look like my mom. Seeing myself in her image, like this daughter up top, makes me so proud of how far I’ve come, and so thankful for where I come from.
Related Post
Layout not defined
Layout not defined
Layout not defined
Layout not defined
Layout not defined