Latestಹುಬ್ಬಳ್ಳಿ-ಧಾರವಾಡ

ಭಾವೈಕ್ಯ ಗೆ ಸಾಕ್ಷಿಯಾದರು ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ – ಚಾರ್ಲಿ ಅವರ ಕೆಲಸಕ್ಕೆ ಸೈ ಅಂದರು ಠಾಣೆ ಯ ಸಿಬ್ಬಂದಿ…..

ಹುಬ್ಬಳ್ಳಿ –

ಹೌದು ಇಂತಹದೊಂದು ಭಾವೈಕ್ಯತೆಗೆ ಸಾಕ್ಷಿ ಯಾಗಿದೆ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ಅದರಲ್ಲೂ ಠಾಣೆಯ ಇನ್ಸ್ಪೆಕ್ಟರ್ ಮಾಡಿರುವ ಕೆಲಸ ನೋಡಿದರೆ ತುಂಬಾ ತುಂಬಾ ಖುಷಿಯಾಗುತ್ತದೆ ಸಧ್ಯ ಬಂದಿರುವ ಗಣೇಶ ಹಬ್ಬ ದಲ್ಲಿ ಠಾಣೆ ಯಲ್ಲಿ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ-ಧರ್ಮಗಳ ಗೋಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ” ಮೆರೆದಿದ್ದಾರೆ ಇನ್ಸ್ಪೆಕ್ಟರ್ ಜಾಕೀರ ಪಾಷಾ ಕಾಲಿಮಿರ್ಚಿ ಮತ್ತು ಠಾಣೆಯ ಸಿಬ್ಬಂದಿ ಸಮಾಜದಲ್ಲಿ ಸರ್ವಧರ್ಮ ಭಾವೈಕ್ಯತೆಯೇ ಮುಖ್ಯ ಎನ್ನುವ ಮಾತಿಗೆ ಹುಬ್ಬಳ್ಳಿ ಗೊಕುಲ್ ರೋಡ್ ಪೊಲೀಸ್ ಠಾಣಾ ಮುಖ್ಯಾಧಿಕಾರಿ ಜಾಕೀರಪಾಷಾ ಕಾಲಿ‌ಮಿರ್ಚಿ ಅವರು ಮತ್ತು ಠಾಣೆಯ ಎಲ್ಲಾ ಸಿಬ್ಬಂದಿ ತಾವೇ ಸ್ವತಃ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಭಾವೈಕ್ಯತೆ ಮೆರೆದಿದ್ದಾರೆ. ಹೌದು ಸದಾ ಸಾಮಾಜಿಕ ಮಾದರಿ ಕಾರ್ಯ ಗಳ ಮೂಲಕ ಹೆಸರಾದ ಗೊಕುಲ್ ರೋಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಾಕೀರಪಾಷಾ ಕಾಲಿಮಿರ್ಚಿ ಇಂದು ಸ್ವತಃ ತಾವೇ ತಮ್ಮ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ ಹಣೆಗೆ ತಿಲಕ ಇಟ್ಟು ಕೊಂಡು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪೊಲೀಸ್ ಜೀಪಿನಲ್ಲಿ ತೆರಳಿ ಪ್ರತಿಷ್ಠಾಪನೆ ‌ಮಾಡುವ ಮೂಲಕ ಜಾತಿ-ಧರ್ಮಗಳ ಗೊಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಗೆ ಏಕರೂಪ ನೀಡಿದ್ದಾರೆ.ಇವರ ಈ ಒಂದು ಕಾರ್ಯಕ್ಕೆ ಠಾಣೆಯ ಎಲ್ಲಾ ಸಿಬ್ಬಂದಿ ಸಾಥ್ ನೀಡಿದ್ದಾರೆ. ಹೀಗಾಗಿ ಗೋಕುಲ್ ರೋಡ್ ಪೋಲಿಸ್ ಠಾಣಾಧಿಕಾರಿಯ ಮತ್ತು ಸಿಬ್ಬಂದಿ ಗಳ ಮಾದರಿ ಕಾರ್ಯಕ್ಕೊಂದು ಸಲಾಂ.

Leave a Reply

Your email address will not be published. Required fields are marked *

error: Content is protected !!