Uncategorized

ಹುಬ್ಬಳ್ಳಿಯಲ್ಲಿ ಖೋಟಾ ನೋಟು ಚಲಾವಣೆ ಪತ್ರಕರ್ತ ದತ್ತಾತ್ರೇಯ ಸೇರಿದಂತೆ ನಾಲ್ವರ ಬಂದನ

ಹುಬ್ಬಳ್ಳಿ: ಹುಬ್ಬಳ್ಳಿ ಉಪನಗರ ಪೊಲೀಸರ ಭರ್ಜರಿ ಬೇಟೆ.ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಖತರನಾಕ ಕಿಲಾಡಿಗಳ ಬಂಧನ ಬಿಜಾಪುರದಿಂದ ಖೋಟಾ ನೋಟು ಚಲಾವಣೆ ಮಾಡಲು ಹುಬ್ಬಳ್ಳಿಯ ಖಾಸಗಿ ಹೋಟೆಲ ಸನ್ಮಾನ ಲಾಡ್ಜನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇಲೆ ಉಪನಗರ ಪೋಲೀಸರು ಲಾಡ್ಜ ಮೇಲೆ ದಾಳಿ ಮಾಡಿದ್ದು ಇನ್ನು ದಾಳಿಯ ಸಮಯದಲ್ಲಿ ಮೂವರು ಆರೋಪಿಗಳು ಸಿಕ್ಕಿ ಬಿದ್ದು ಒಬ್ಬ ಆರೋಪಿ ಪರಾರಿ ಆಗಿದ್ದಾನೆ

.ಇನ್ನು ಬಂದಿತರಿಂದ 200 ರೂ ಮುಖ ಬೆಲೆಯ 129 ಖೋಟಾ ನೋಟು . 100 ರೂ ಮುಖ ಬೆಲೆಯ 77 ಖೋಟಾ ನೋಟು ಹಾಗು ಯುನೈಟೆಡ್ ಸ್ಟೇಟ್ಸ್ ಆಪ್ ಅಮೇರಿಕಾದ ಒಂದು ಮಿಲಿಯನ್ ಡಾಲರ ಹಾಗು ಅದ್ಕೆ ಸಂಭಂದಪಟ್ಟ ಸರ್ಟಿಫಿಕೇಟ್ ಮತ್ತು 100 ರೂ ಮುಖಬೆಲೆಯ 20 ಅಸಲಿ ನೋಟ ಗಳು ಒಂದು ಪ್ರೀಂಟರ ಮಷೀನ್ 4 ಬಣ್ಣದ ಡಬ್ಬಿಗಳನ್ನು ವಶಪಡಿಸಿಕೊಂಡಿರುತ್ತಾರೆ

ಇನ್ನೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಉಪನಗರ ಠಾಣೆ ಪೋಲಿಸರು ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಗುರುರಾಜ . ಕಲ್ಲಯ್ಯ ಪಟ್ಟದಮಠ. ಶಿವಾನಂದ ಕಾರಜೋಳ ಹಾಗು ಮಾಸ ಪತ್ರಿಕೆ ಕನ್ನಡ ಚಂದ ಪತ್ರಕರ್ತ ಹಾಗು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ದತ್ತಾತ್ರೇಯ ಕುಂಬಾರ‌ ಈ ನಾಲ್ಕು ಆರೋಪಿಗಳನ್ನು ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ
ಇನ್ನು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ

ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತರದ ಲಾಬೂರಾಮ್ ಇವರ ನೇತೃತ್ವದಲ್ಲಿ ಡಿಸಿಪಿಗಳಾದ ಸಾಹಿಲ ಬಾಗ್ಲಾ .ಗೋಪಾಲ ಎಮ್ ಬ್ಯಾಕೋಡ .ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ

ಉಪನಗರ ಠಾಣೆಯ ಇನ್ಸಪೆಕ್ಟರ ಆದ ರವಿಚಂದ್ರನ್ ಡಿ.ಬಿ ಇವರ ನೇತೃತ್ವದಲ್ಲಿ ಪಿಎಸಐ ಕವಿತಾ ಎಸ್ ಎಮ್.ಸ್ವಾತಿ ಮುರಾರಿ ಎ ಎಸ್ ಐ ಎಮ್ ಆರ್ ಮಲ್ಲಿಗವಾಡ ಜೊತೆಯಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಧನಿಗೊಂಡ.ಮಂಜುನಾಥ ಯಕ್ಕಡಿ. ಶ್ರೀನಿವಾಸ್ ಯರಗುಪ್ಪಿ. ಕೃಷ್ಣಾ ಮೋಟೆಬೆನ್ನೂರ. ಮಂಜುನಾಥ ಹಾಲರವ. ರೇಣು ಸಿಕ್ಕಲಗೇರ. ಪ್ರಕಾಶ ಕಲಗುಡಿ.ಮಾಬುಸಾಬ ಮುಲ್ಲಾ.ಆರೂಢ ಕರೆಣ್ಣವರ ಡಿ ಎ ಮಾಂಗ . ಎಮ್ ಅಯ್ಯನಗೌಡರ. ಜಗದೀಶ್ ಹಟ್ಟಿ. ಹಾಗು ತಾಂತ್ರಿಕ ವಿಭಾಗದ ವರಾದ್ ಆರ ಕೆ ಬಡಂಕರ. ಎಮ್ ಎಸ್ ಚಿಕ್ಕಮಠ.ರವಿ ಗೋಮಪ್ಪನವರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!