ಪೌಷ್ಠಿಕ ಆಹಾರ ಅಕ್ರಮದಲ್ಲಿ ಮತ್ತೆ ಇಬ್ಬರು ಅಧಿಕಾರಿಗಳ ತೆಲೆದಂಡ.ಐವರು ಪತ್ರಕರ್ತರ ಬಂಧನ……

ಅಂಗನವಾಡಿ ಪೌಷ್ಠಿಕ ಆಹಾರ ಅಕ್ರಮ ಕೆಸನಲ್ಲಿ ಮತ್ತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಮೇಲಾಧಿಕಾರಿಗಳು ಆದೇಶಿಸಿದ್ದಾರೆ.ಇನ್ನು ಬೈತುಲಾ ಕಿಲ್ಲೆದಾರ ಗೆ ಸಹಾಯ ಮಾಡಿದ ಐವರು ಪತ್ರಕರ್ತರನ್ನು ಸಹ ಕಸಬಾಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಇನ್ನು ಗಂಗಮ್ಮಾ ತುಮಗೇರಿ ಹಳೆ ಹುಬ್ಬಳ್ಳಿ ವಲಯ ಅಧಿಕಾರಿ. ಹಾಗು ಮಂಜುನಾಥ ಮರೆಮ್ಮನವರ ಎಫ್ ಡಿ ಸಿ ಅವರನ್ನು ಅಮಾನತು ಮಾಡಲಾಗಿದ್ದು.
ಪ್ರಕರಣದ ಪ್ರಮುಖ ಆರೋಪಿತರಾದ ಬತುಲಾ ಕಿಲ್ಲೆದಾರ ಮತ್ತು ಪಾರೂಖ ಶೇಖ ಇವರು ಪರಾರಿಯಾಗಲು ಸಹಾಯ, ಸಹಕಾರ ನೀಡಿದ ನಕಲಿ ಪತ್ರಕರ್ತರಾದ

1] ಅಲ್ತಾಫ ಕಲಾದಗಿ, ಸೋನಿಯಾಗಾಂಧಿನಗರ, ಹುಬ್ಬಳ್ಳಿ,2] ದಾದಾಪೀರ ಚೌಧರಿ, ಸಾಃ ಬಂಕಾಪೂರ ಚೌಕ್, ಹುಬ್ಬಳ್ಳಿ, 3] ಸಲೀಂ ಬೇಪಾರಿ, ಉದಯನಗರ, ಕೇಶ್ವಾಪೂರ ಹುಬ್ಬಳ್ಳಿ,
4] ಸಲೀಂ ಶೇಖ, ಸಾಃ ಮನೆ ನಂ: 70, ಉದಯನಗರ, ಕೇಶ್ವಾಪೂರ ಹುಬ್ಬಳ್ಳಿ,
5] ಸಲೀಂ ಅತ್ತಾರ, ಸಾಃ ಮೆಹಬೂಬನಗರ, ಯಲ್ಲಾಪೂರ ಓಣಿ, ಹುಬ್ಬಳ್ಳಿ, 6] ಬಸವರಾಜ ವಾಲ್ಮೀಕಿ, ಸಾಃ ಬಂಕಾಪೂರ ಚೌಕ್ ಹುಬ್ಬಳ್ಳಿ
ಇವರನ್ನು ಬಂಧಿಸಲಾಗಿದ್ದು ಇನ್ನು ಅನೇಕ ಪತ್ರಕರ್ತರು ಈ ಹಗರಣದಲ್ಲಿ ಭಾಗಿಯಾದ ಬಗ್ಗೆ ಹುಬ್ಬಳ್ಳಿಯ ಗಲ್ಲಿ ಗಲ್ಲಿಯಲ್ಲಿ ಹರದಾಡುತ್ತಿದೆ.