Uncategorized

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಕೂಗು ಜೋರಾಗಿದೆ

ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಬೆಂಗಳೂರಿನಲ್ಲಿ ಒತ್ತಾಯ ಕೇಳಿ ಬಂದ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ ಈ ಒಂದು ಕೂಗು ಜೋರಾಗಿ ಕೇಳಿ ಬಂದಿದೆ.ಹೌದು ಮತ್ತೇ ಮುನ್ನೆಲೆಗೆ ಬರಲಿ ದೆಯಾ ಈದ್ಗಾ ವಿವಾದ ಎಂಬ ಮಾತುಗಳಿಗೆ ಪುಷ್ಟಿ ಸಿಕ್ಕಿದ್ದು ಇಲ್ಲೂ ಕೂಡಾ ಗಣೇಶ ಚತುರ್ಥಿ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಮನವಿ ನೀಡಲಾಗಿದೆ.ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳ್ಳಿ‌ ಈದ್ಗಾ ಮೈದಾನ ಈಗ ಮತ್ತೇ ಈದ್ಗಾ ಮೈದಾನದ ವಿವಾದ ಪುಟಿದೇಳುವ ಲಕ್ಷಣಗಳು ಗೋಚರಿಸುತ್ತಿವೆ.ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿಗೂ ವ್ಯಾಪಿಸುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿದೆ.ಈಗಾಗಲೇ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಮುಕ್ತಾಯಗೊಂಡು ಶಾಂತ ರೀತಿಯಲ್ಲಿತ್ತು.ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಮನವಿಯನ್ನು ನೀಡ ಲಾಗಿದೆ.ರಾಣಿ ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಪಾಲಿಕೆ ಆಯುಕ್ತರಿಗೆ ಮನವಿಯನ್ನು ನೀಡಿದ್ದಾರೆ.ಇದು ಈಗ ಸಾಕಷ್ಟು ಚರ್ಚೆಗೆ ಗ್ರಾಮವಾಗಿದೆ.ಇನ್ನೂ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿಯೇ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಹೋರಾಟ ಮಾಡಿ ಮನವಿಯನ್ನು ನೀಡಲಾ ಗಿದೆ ಪಾಲಿಕೆಯ ಆಯುಕ್ತರಿಗೆ ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಆಗಸ್ಟ್ 15 ರ ಮೂರು ಸಾವಿರ ಮಠ ದಲ್ಲಿನ ಸಭೆಯಲ್ಲಿ ಅಂತಿಮ ವಾಗಲಿದ್ದು ಏನೇನಾಗಲಿದೆ ಯಾವ ತೀರ್ಮಾನ ವನ್ನು ಕೈಗೊಳ್ಳಲಿದ್ದಾರೆ ಎಂಬೊಂದನ್ನು ಕಾದು ನೋಡಬೇಕು

Leave a Reply

Your email address will not be published. Required fields are marked *

error: Content is protected !!