Uncategorized

ಭೀಕರ ರಸ್ತೆ ಅಪಘಾತ ಛಿದ್ರ ಛಿದ್ರವಾದ ಯುವಕನ ದೇಹ

ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರ ಯುವಕರಿಗೆ ಟಿಪ್ಪರ ಚಾಲಕ ವೇಗವಾಗಿ ಬಂದು ಗುದ್ದಿದ ಪರಿಣಾಮ, ಯುವಕನೊಬ್ಬನ ದೇಹ ಛಿದ್ರ ಛಿದ್ರವಾದ ಘಟನೆ ನಿನ್ನೆ ತಡರಾತ್ರಿ ಕುಸಗಲ್ ರಸ್ತೆಯಲ್ಲಿ ನಡೆದಿದೆ.

ಹೌದು,,, ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪೂರ ನಿವಾಸಿ ರಹಿಮಾನಸಾಬ್ ಕೆರಿಮನಿ ಹಾಗೂ ಹಳೇ ಹುಬ್ಬಳ್ಳಿ ನಿವಾಸಿ ಸೈಯ್ಯದಸಾಬ ಗದಗಕರ ಈ ಇಬ್ಬರು ಯುವಕರು ಒಂದು ವಾಹನವನ್ನು ಟೊಯಿಂಗ ಮಾಡಿಕೊಂಡು ಬರುವಾಗ,

ಕುಸಗಲ್ ರಸ್ತೆಯಲ್ಲಿರುವ ಸಿದ್ದಾರೂಢ ಮಠದ ಹತ್ತಿರ ವಾಹನ ನಿಲ್ಲಿಸಿ ಹಗ್ಗ ಬಿಗಿಯಾಗಿ ಕಟ್ಟುತ್ತಿರುವಾಗ, ಅದೆ ಮಾರ್ಗವಾಗಿ ಎಂಸ್ಯಾಂಡ್ ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ ಚಾಲಕ, ಆ ಇಬ್ಬರ ಯುವಕರಿಗೆ ಗುದ್ದಿದ್ದಾನೆ.

ಆ ಇಬ್ಬರಲ್ಲಿ ಚನ್ನಾಪೂರ ನಿವಾಸಿ ರಹಿಮಾನಸಾಬ್ ದೇಹ ಛಿದ್ರ ಛಿದ್ರವಾಗಿದೆ. ಇನ್ನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ ಟಿಪ್ಪರ ಚಾಲಕ ಗುದ್ದಿ ಪರಾರಿಯಾಗಿದ್ದಾನೆ. ಇನ್ನು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾಣಿಸಿ ತನಿಖೆ ಪ್ರಾರಂಬಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!