Uncategorized

ಜೈಲಿನಲ್ಲಿ ಪೊಲೀಸ ಮೇಲೆ ಕೈದಿಯಿಂದ ಹಲ್ಲೆ ಧಾರವಾಡದಲ್ಲಿ ನಡೆದಿದೆ

ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಗಳ ನಡುವೆ ಹೊಡೆದಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಕೈದಿ ಮತ್ತು ಜೈಲು ಸಿಬ್ಬಂದಿ ಮಧ್ಯೆ ಈ ಒಂದು ಹೊಡೆದಾಟ ನಡೆದಿದೆ.ಜೈಲು ಸಿಬ್ಬಂದಿ ಮತ್ತು ಕೈದಿ ಇಬ್ಬರಿಗೂ ತೀವ್ರವಾದ ಗಾಯಗಳಾಗಿದ್ದು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಈ ಒಂದು ಘಟನೆ ನಡೆದಿದೆ.
ಇಬ್ಬರೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಗಾಯಗೊಂಡ ಜೈಲು ಸಿಬ್ಬಂದಿ ಮೋಹನ ಸಿದ್ದಪ್ಪ ಬಡಿಗೇರ, ಇನ್ನು ಪ್ರಶಾಂತ ಅಲಿಯಾಸ್ ಪಾಚು, ಹಲ್ಲೆ ಮಾಡಿದ ಕೈದಿಯಾಗಿದ್ದು ಅನೇಕ ದಿನಗಳಿಂದ ಧಾರವಾಡ ಕಾರಾಗೃಹದಲ್ಲಿದ್ದ ಪ್ರಶಾಂತ.ಬಾಚಣಿಕೆಯನ್ನೇ ಚಾಕೂವಿನಂತೆ ಮಾಡಿ ಹಲ್ಲೆ ಮಾಡಿರುವ  ಸಾಧ್ಯತೆ ಕಂಡು ಬಂದಿದ್ದು ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಉಪನಗರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ದು ಇತ್ತ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಜೈಲಿನಲ್ಲಿ ಈ ತರಾ ಪೊಲೀಸರ್ ಮೇಲೆ  ಕೈದಿಗಳು ಹಲ್ಲೆ ನಡೆಸುತ್ತಿದ್ದರೆ ನಮಗೆ ರಕ್ಷಣೆ ನಿಡುವ ಪೊಲೀಸರಿಗೆ ಈ ತರಾ ಆದರೆ ಹೊರಗೆ ಇಂತಹ ಕೈದಿಗಳು ಬಂದರೆ ತಮ್ಮ್ ಪರಿಸ್ಥಿತಿ ಏನಾಗ ಬಹುದು ಅಂತಾ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!