ಹಿಂದು ಯುವತಿಯ ಮೇಲೆ ಹಲ್ಲೆ ಮಾಡಿದ ಯುವಕ. ಕೇಶ್ವಾಪುರ ಪೊಲೀಸರ ಚಾಣಾಕ್ಷತನಕ್ಕೆ ತಪ್ಪಿದ ಅನಾಹುತ.

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಸುವ ಮುನ್ನವೇ ಹಿಂದು ಯುವತಿಗೆ ಕ್ಷುಲಕ ವಿಚಾರಕ್ಕೆ ಯುವಕನೊರ್ವ ಹಲ್ಲೇ ಮಾಡಿದ ಘಟನೆ ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇಲ್ಲಿನ ಪೂರ್ವ ಸಂಚಾರಿ ಪೋಲಿಸ್ ಠಾಣೆಯ ಮುಂಭಾಗದಲ್ಲಿನ ಹಣ್ಣಿನ ಅಂಗಡಿಗೆ ಬಂದಿದ್ದ ಹಿಂದು ಯುವತಿ ಹಣ್ಣು ಖರೀದಿಗೆ ಬಂದಿದ್ದ ವೇಳೆ ಅಫ್ತಾಬ್ ಎಂಬ ಯುವಕ ತನ್ನ ಪ್ರೀತಿಗೆ ಅವಾಯ್ಡ ಯಾಕೆ ಮಾಡುತ್ತಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಸ್ಥಳದಲ್ಲಿದ್ದ ಜನರು ಹಲ್ಲೇ ಮಾಡುತ್ತಿದ್ದ ಯುವಕನನ್ನು ಹಿಡಿದು ಹೊಡೆದಿದ್ದಾರೆ.
ಬಳಿಕ ಕೇಶ್ವಾಪುರ ಪೋಲಿಸ್ ಠಾಣೆಗೆ ವಿಷಯ ತಿಳಿಸಿ ಯುವತಿ ಹಾಗೂ ಯುವಕನನ್ನು ಕರೆದೊಯ್ದು, ದೂರು ದಾಖಲಿಸಿದ್ದಾರೆ.
ಇನ್ನೊಂದು ಕಡೆಗೆ ಯುವತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತೆ ಅಫ್ತಾಬ್ ಸ್ನೇಹಿತರಾಗಿದ್ದೇವು, ಆ ಬಳಿಕ ಕಳೆದ ಕೆಲವು ದಿನಗಳ ಹಿಂದೆ ನಡೆದ ಸ್ನೇಹ ಪ್ರಕರಣವನ್ನು ನೋಡಿ ನಮ್ಮ ಸ್ನೇಹವನ್ನು ಅಂತ್ಯಗೊಳಿಸಲು ನಿರ್ಧಾರ ಮಾಡಿದ್ದೇವು.
ಅದರಂತೆ ಅಫ್ತಾಬ್ ನೀಡಿದ ಗಿಫ್ಟ್’ಗಳನ್ನು ಕೊಟ್ಟು ವಾಪಾಸ್ ಬರುವಾಗ ಅಫ್ತಾಬ್ ಗಿಫ್ಟ್’ಗಳಿಗೆ ಬೆಂಕಿ ಹಚ್ಚಿ ಹಲ್ಲೇ ಮಾಡಿದ್ದಾನೆಂದು ತಿಳಿಸಿದ್ದಾರೆ.
ಸದ್ಯ ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸಬೇಕಿದೆ.